ನಿಮ್ಮ ಕವನ ಸಂಕಲನಕ್ಕೆ ಪುರಸ್ಕಾರದ ಭಾಗ್ಯ…

೨೦೨೫ ನೇ ಸಾಲಿನ” ಸೃಷ್ಟಿ ಕಾವ್ಯ ಪುರಸ್ಕಾರ”ಕ್ಕೆ ಕವನ ಸಂಕಲನಗಳ ಆಹ್ವಾನ… (೫ ನೇ ವರ್ಷದ ಪ್ರಕಟಣೆ)

ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ ‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ೨೦೨೫ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ/ಗಜಲ್ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.

ಪ್ರಶಸ್ತಿಯು ೫೦೦೦ ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ನಿಯಮಗಳು:-

  • ೨೦೨೫ರಲ್ಲಿ ಪ್ರಕಟಗೊಂಡ ಕವನ ಸಂಕಲನದ ೩ ಪ್ರತಿಗಳನ್ನು ಕಳುಹಿಸುವುದು.
  • ಕೃತಿಯ ಪ್ರಥಮ ಮುದ್ರಣವಾಗಿರಬೇಕು.
  • ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.
  • ಸಂಕಲನ ಕಳುಹಿಸುವ ಕೊನೆಯ ದಿನಾಂಕ: ೩೧ / ೧೨/ ೨೦೨೫

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಅಶೋಕ ಹೊಸಮನಿ
ಸಂಚಾಲಕರು,
ಸೃಷ್ಟಿ ಕಾವ್ಯ ಪುರಸ್ಕಾರ
ಜೆ.ಪಿ.ನಗರ ಕಾರಟಗಿ
ಸಾ| ತಾ| ಕಾರಟಗಿ – ೫೮೩೨೨೯
ಜಿ| ಕೊಪ್ಪಳ
ಮೊ: ೮೮೮೪೧೫೬೫೦೦

Leave a Comment

Your email address will not be published. Required fields are marked *

Scroll to Top